ಮುಂಬೈನ 'ಸ್ಟಾರ್ ಲೋಕ'ಕ್ಕೆ ಪುಷ್ಪರಾಜನ ಎಂಟ್ರಿ: ಕೊಹ್ಲಿ-ಕತ್ರಿನಾ ಪಕ್ಕದಲ್ಲೇ ಅಲ್ಲು ಅರ್ಜುನ್ ಮನೆ! ತಿಂಗಳ ಬಾಡಿಗೆ ಕೇಳಿದ್ರೆ ದಂಗಾಗ್ತೀರಾ!

Maharashtra:

Font size:

ಹೈದರಾಬಾದ್ ಬಿಟ್ಟು ಮಾಯಾನಗರಿಗೆ ಶಿಫ್ಟ್ ಆದ್ರಾ ಐಕಾನ್ ಸ್ಟಾರ್? ಸೀ-ಫೇಸಿಂಗ್ ಅಪಾರ್ಟ್‌ಮೆಂಟ್‌ನ ಲಕ್ಷಾಂತರ ರೂಪಾಯಿ ಬಾಡಿಗೆಯ ಹಿಂದಿರುವ ಅಸಲಿ ರಹಸ್ಯವೇನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

ಮುಂಬೈ: ಸದ್ಯ ಭಾರತೀಯ ಚಿತ್ರರಂಗದಲ್ಲಿ 'ಪುಷ್ಪ' ಅಲೆಯ ಅಬ್ಬರ ಜೋರಾಗಿದೆ. ‘ಪುಷ್ಪ’ ಮತ್ತು ‘ಪುಷ್ಪ-2’ ಸಿನಿಮಾಗಳ ಅಭೂತಪೂರ್ವ ಯಶಸ್ಸಿನ ನಂತರ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರ ಖ್ಯಾತಿ ಗಡಿ ದಾಟಿದೆ. ಈಗ ಇದೇ ಫ್ಯಾನ್ ಇಂಡಿಯಾ ಸ್ಟಾರ್ ಮುಂಬೈನ ಅತ್ಯಂತ ಐಷಾರಾಮಿ ಪ್ರದೇಶದಲ್ಲಿ ಹೊಸ ಗೂಡು ಹೂಡಿದ್ದಾರೆ. ಅದು ಸಾಮಾನ್ಯ ಮನೆಯಲ್ಲ, ಬಾಲಿವುಡ್ ದಿಗ್ಗಜರು ಹಾಗೂ ಕ್ರಿಕೆಟ್ ಲೋಕದ ಸುಲ್ತಾನರು ವಾಸಿಸುವ ಅತೀ ದೊಡ್ಡ ಸೆಲೆಬ್ರಿಟಿ ಹಬ್!

ಕೊಹ್ಲಿ-ಕತ್ರಿನಾ ಈಗ ಪಕ್ಕದ ಮನೆಯವರು!

​ಮುಂಬೈನ ಸಮುದ್ರದ ತೀರದಲ್ಲಿರುವ ಅತ್ಯಂತ ಪ್ರತಿಷ್ಠಿತ ಹೈ-ಎಂಡ್ ಅಪಾರ್ಟ್‌ಮೆಂಟ್‌ನಲ್ಲಿ ಅಲ್ಲು ಅರ್ಜುನ್ ಫ್ಲ್ಯಾಟ್ ಒಂದನ್ನು ಬಾಡಿಗೆಗೆ ಪಡೆದಿದ್ದಾರೆ. ವಿಶೇಷವೆಂದರೆ, ಇದೇ ಅಪಾರ್ಟ್‌ಮೆಂಟ್‌ನಲ್ಲಿ ಟೀಮ್ ಇಂಡಿಯಾದ ರನ್ ಮಷೀನ್ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಜೋಡಿ ಹಾಗೂ ಬಾಲಿವುಡ್ ಬೆಡಗಿ ಕತ್ರಿನಾ ಕೈಫ್-ವಿಕಿ ಕೌಶಲ್ ದಂಪತಿ ವಾಸಿಸುತ್ತಿದ್ದಾರೆ. ಈಗ ಇವರೆಲ್ಲರಿಗೂ ಅಲ್ಲು ಅರ್ಜುನ್ ನೆರೆಯವರಾಗಿದ್ದಾರೆ.

ಬಾಡಿಗೆ ಕೇಳಿದರೆ ಹೌಹಾರೋದು ಗ್ಯಾರಂಟಿ!

​ಮುಂಬೈನ ಅರಬ್ಬಿ ಸಮುದ್ರಕ್ಕೆ ಮುಖ ಮಾಡಿರುವ ಈ ಸೀ-ಫೇಸಿಂಗ್ ಮನೆಯ ಸೌಂದರ್ಯಕ್ಕೆ ಸಾಟಿಯಿಲ್ಲ. ಅಷ್ಟೇ ಐಷಾರಾಮಿಯಾಗಿರುವ ಈ ಫ್ಲ್ಯಾಟ್‌ಗೆ ಅಲ್ಲು ಅರ್ಜುನ್ ಪಾವತಿಸುತ್ತಿರುವ ಬಾಡಿಗೆ ಎಷ್ಟು ಗೊತ್ತಾ? ಮೂಲಗಳ ಪ್ರಕಾರ, ಪ್ರತಿ ತಿಂಗಳು ಬರೋಬ್ಬರಿ 16 ಲಕ್ಷ ರೂಪಾಯಿಗಳನ್ನು ಅವರು ಬಾಡಿಗೆ ರೂಪದಲ್ಲಿ ನೀಡಲಿದ್ದಾರಂತೆ! ಸಾಮಾನ್ಯ ವ್ಯಕ್ತಿಯೊಬ್ಬನ ಇಡೀ ವರ್ಷದ ಸಂಪಾದನೆ ಈ ಮನೆಯ ಒಂದು ತಿಂಗಳ ಬಾಡಿಗೆಯಾಗಿದೆ ಎನ್ನುವುದು ವಿಶೇಷ.

ಮುಂಬೈ ವಾಸಕ್ಕೆ ಕಾರಣವೇನು?

​ಅಲ್ಲು ಅರ್ಜುನ್ ಸದ್ಯ ಸನ್ ಪಿಕ್ಚರ್ಸ್ ನಿರ್ಮಾಣದ ‘ರಾಕಾ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಸುಮಾರು 600 ಕೋಟಿ ರೂಪಾಯಿಗಳಿಗೂ ಅಧಿಕ ಬೃಹತ್ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಸಿನಿಮಾದ ಬಹುತೇಕ ಚಿತ್ರೀಕರಣ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಂಬೈನಲ್ಲೇ ನಡೆಯುತ್ತಿವೆ. ಪ್ರತಿದಿನ ಹೈದರಾಬಾದ್‌ನಿಂದ ಪ್ರೈವೇಟ್ ಜೆಟ್‌ನಲ್ಲಿ ಓಡಾಡುವುದು ದೊಡ್ಡ ವೆಚ್ಚಕ್ಕೆ ಕಾರಣವಾಗುತ್ತಿತ್ತು. ಈ ವೆಚ್ಚವನ್ನು ಭರಿಸಲು ನಿರ್ಮಾಣ ಸಂಸ್ಥೆ ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ, ಚಿತ್ರೀಕರಣ ಮುಗಿಯುವವರೆಗೆ ಅಲ್ಲು ಅರ್ಜುನ್ ಮುಂಬೈನಲ್ಲೇ ಬೀಡುಬಿಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಮಗನ 'ಶಿಫ್ಟಿಂಗ್' ಬಗ್ಗೆ ಅಪ್ಪ ಏನಂತಾರೆ?

​ಅಲ್ಲು ಅರ್ಜುನ್ ಮುಂಬೈಗೆ ಶಿಫ್ಟ್ ಆಗುತ್ತಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ ಅವರ ತಂದೆ, ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಸ್ಪಷ್ಟನೆ ನೀಡಿದ್ದಾರೆ. "ನನ್ನ ಮಗ ಎಲ್ಲಿಗೂ ಕಾಯಂ ಆಗಿ ಶಿಫ್ಟ್ ಆಗುತ್ತಿಲ್ಲ. ಅವನ ಹೃದಯ ಮತ್ತು ಮನೆ ಇರುವುದು ಹೈದರಾಬಾದ್‌ನಲ್ಲಿ ಮಾತ್ರ. ಮಕ್ಕಳ ವಿದ್ಯಾಭ್ಯಾಸ ಮತ್ತು ಕುಟುಂಬ ಇಲ್ಲೇ ಇರುವುದರಿಂದ ಮುಂಬೈ ವಾಸ ಕೇವಲ ಸಿನಿಮಾ ಕೆಲಸಗಳಿಗಾಗಿ ಮಾತ್ರ" ಎಂದು ವದಂತಿಗಳಿಗೆ ತೆರೆ ಎಳೆದಿದ್ದಾರೆ.

​ಒಟ್ಟಿನಲ್ಲಿ, ಕೆಲಸದ ನಿಮಿತ್ತವೇ ಆದರೂ ಮಾಯಾನಗರಿಯಲ್ಲಿ ಪುಷ್ಪರಾಜನ ರಾಜಾತಿಥ್ಯ ಹಾಗೂ ಐಷಾರಾಮಿ ಜೀವನ ಶೈಲಿ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

Comments

Leave a Comment

Prev Post ಫ್ರೀ ಫೈಯರ್' ಬೆಂಕಿಗೆ ಬಲಿಯಾದ ಬಾಲಕನ ಬದುಕು: ಮೊಬೈಲ್ ಕೊಡದ್ದಕ್ಕೆ ಮಗ ಸಾವು, ಹೆತ್ತವರ ಕರುಳು ಕುಯ್ದಂತ ರೋದನ!

ಚಿತ್ರರಂಗದ ಕರಾಳ ಹಾದಿ: ಆ ನಿರ್ದೇಶಕ ನನ್ನನ್ನು ಅಸಭ್ಯವಾಗಿ ಮುಟ್ಟಿದ್ದ; ಕಾಸ್ಟಿಂಗ್ ಕೌಚ್ ಕಹಿ ನೆನಪು ಬಿಚ್ಚಿಟ್ಟ 'ಭದ್ರ' ನಟಿ ಡೈಸಿ ಶಾ!

ಆಡಿಷನ್ ಹೆಸರಲ್ಲಿ ನಡೆದ ಅಸಭ್ಯ ವರ್ತನೆ; ಮುಂಬೈ ಹೋಟೆಲ್‌ನಲ್ಲಿ ದಕ್ಷಿಣದ ನಿರ್ದೇಶಕನ ಕಾಮದೃಷ್ಟಿಗೆ ಬೆಚ್ಚಿಬಿದ್ದಿದ್ದ ನಟಿ ಈಗ ಆ ಕರಾಳ ಸತ್ಯವನ್ನು ಜಗತ್ತಿನ ಮುಂದೆ ತೆರೆದಿಟ್ಟಿದ್ದಾರೆ.

ವಯಸ್ಸಿನ ಹಂಗು ಮರೆತು ಸಪ್ತಪದಿ ತುಳಿದ ಜೋಡಿ: ರಕ್ಷಣೆಗಾಗಿ ಮೈಸೂರು ಎಸ್‌ಪಿ ಮೊರೆ

ಕುಟುಂಬಸ್ಥರಿಂದ ಜೀವ ಬೆದರಿಕೆ ಆರೋಪ; 14 ವರ್ಷದ ಮಗನಿರುವ ಮಹಿಳೆ ಹಾಗೂ 22ರ ಯುವಕನ ವಿವಾಹ

ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿದ ರಣವೀರ್ ಸಿಂಗ್ ನಟನೆಯ 'ಧುರಂಧರ್ 2' ಶೀಘ್ರದಲ್ಲೇ ಒಟಿಟಿಗೆ ಲಗ್ಗೆ: ಬಿಡುಗಡೆಯ ದಿನಾಂಕ ಮತ್ತು ಸ್ಟ್ರೀಮಿಂಗ್ ವಿವರಗಳು ಇಲ್ಲಿದೆ!

ಭರ್ಜರಿ 1700 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವ ಆದಿತ್ಯ ಧರ್ ನಿರ್ದೇಶನದ ಈ ಸ್ಪೈ ಥ್ರಿಲ್ಲರ್ ಸಿನಿಮಾ, ಬರೋಬ್ಬರಿ 150 ಕೋಟಿ ರೂಪಾಯಿಗೆ ಒಟಿಟಿ ಹಕ್ಕುಗಳನ್ನು ಮಾರಾಟ ಮಾಡಿದ್ದು, ಕಾನೂನು ಹೋರಾಟದ ನಡುವೆಯೂ ಮೇ ತಿಂಗಳಿನಲ್ಲಿ ಡಿಜಿಟಲ್ ಪರದೆಯ ಮೇಲೆ ಅಬ್ಬರಿಸಲು ಸಜ್ಜಾಗಿದೆ.

ಕನಸಿನ ಪಯಣದಲಿ ಕಣ್ಣೀರಿನ ಧಾರೆ: ಪತಿ ರಿತೇಶ್ ಮಾತು ಕೇಳಿ ವೇದಿಕೆಯಲ್ಲೇ ಕಣ್ಣೀರಿಟ್ಟ ಜೆನಿಲಿಯಾ!

ರಾಜ ಶಿವಾಜಿ' ಟ್ರೇಲರ್ ಲಾಂಚ್‌ನಲ್ಲಿ ಭಾವುಕ ಕ್ಷಣ; ಸತಿ-ಪತಿಯ ಪ್ರೇಮಕ್ಕೆ ಸಾಕ್ಷಿಯಾದ ಮುಂಬೈ ಅಂಗಳ

ಧುರಂಧರ್’ ಅಬ್ಬರಕ್ಕೆ ಫಿದಾ ಆದ ನಿರ್ಮಾಪಕರು: ನಟ ರಾಕೇಶ್ ಬೇಡಿಗೆ ಸಿಕ್ತು ಬರೋಬ್ಬರಿ 1 ಕೋಟಿ ರೂ. ಬೋನಸ್!

ಸಂಭಾವನೆಗಿಂತಲೂ ಡಬಲ್ ಧಮಾಕಾ; ಜಮೀಲ್ ಜಮಾಲಿ ಪಾತ್ರದ ಮೋಡಿಗೆ ಮಾರುಹೋದ ಆದಿತ್ಯ ಧರ್ ಅಂಡ್ ಟೀಮ್!

Read all News