ಚಿಕ್ಕಮ್ಮನ ಮೇಲೆ ಗುದ್ದಲಿ ಎತ್ತಿದ ಪಾಪಿಗೆ ಮಗನೇ ಯಮರಾಜ: ಕುಡಿದ ಅಮಲಿನಲ್ಲಿ ಕಿತ್ತಾಟ, ಹಳ್ಳಿಯಲ್ಲಿ ಹೆಣವಾಯ್ತು ಸಂಬಂಧ!

Tumakuru:

Font size:

ಗಾಯಾಳು ತಾಯಿಯ ರಕ್ತ ಕಂಡು ರೊಚ್ಚಿಗೆದ್ದ ಮಗ: ದೊಣ್ಣೆ-ಗುದ್ದಲಿಯಿಂದಲೇ ಮೃತ್ಯು ದರ್ಶನ ಮಾಡಿಸಿದ ಕುಮಾರ್ ಅಂಡ್ ಟೀಮ್

ಕುಣಿಗಲ್ : ಕುಡಿದ ಮತ್ತಿನಲ್ಲಿ ಮನುಷ್ಯ ಮೃಗವಾಗ್ತಾನೆ ಅನ್ನೋದಕ್ಕೆ ಕುಣಿಗಲ್ ತಾಲ್ಲೂಕಿನ ಸಂತೆಮಾವತ್ತೂರಿನಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಕ್ಷುಲ್ಲಕ ಕಾರಣಕ್ಕೆ ತನ್ನದೇ ಚಿಕ್ಕಮ್ಮ ಕಾಳಮ್ಮಳ ಮೇಲೆ ಮನಬಂದಂತೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ಮಂಜುನಾಥ್ ಎಂಬ ಪಾಪಿ, ಈಗ ಅದೇ ರಕ್ತದ ಮಡುವಿನಲ್ಲಿ ಹೆಣವಾಗಿ ಬಿದ್ದಿದ್ದಾನೆ. ಮದ್ಯದ ಅಮಲಿನಲ್ಲಿ ವಿವೇಚನೆ ಕಳೆದುಕೊಂಡಿದ್ದ ಮಂಜುನಾಥ್, ಮನೆಯಲ್ಲಿದ್ದ ಗುದ್ದಲಿ ಮತ್ತು ದೊಣ್ಣೆಗಳನ್ನು ಹಿಡಿದು ಕಾಳಮ್ಮಳ ಮೇಲೆ ರಾಕ್ಷಸನಂತೆ ಎರಗಿದ್ದ. ತೀವ್ರ ರಕ್ತಸ್ರಾವವಾಗಿ ಕಾಳಮ್ಮ ಸಾವು-ಬದುಕಿನ ನಡುವೆ ಹೋರಾಡುತ್ತಾ ಕುಣಿಗಲ್ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ, ಇತ್ತ ಊರಿನಲ್ಲಿ ಸೇಡಿನ ಕಿಚ್ಚು ಹೊತ್ತಿ ಉರಿದಿದೆ.

​ತನ್ನ ತಾಯಿಯ ಮೇಲೆ ನಡೆದ ಈ ಭೀಕರ ಹಲ್ಲೆಯನ್ನು ಕಂಡು ಮಗ ಕುಮಾರ್ ಮತ್ತು ಆತನ ಸಂಬಂಧಿಕರಾದ ಉಮೇಶ್ ಹಾಗೂ ರಂಗಸ್ವಾಮಿ ರೊಚ್ಚಿಗೆದ್ದಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿಯ ಮುಖ ಕಣ್ಣ ಮುಂದೆ ಬರುತ್ತಿದ್ದಂತೆ, ಮಂಜುನಾಥನ ಅಟ್ಟಹಾಸಕ್ಕೆ ಅಂತ್ಯ ಹಾಡಲೇಬೇಕೆಂದು ನಿರ್ಧರಿಸಿದ ಈ ಮೂವರು ಆತನ ಮೇಲೆ ದಾಳಿ ಮಾಡಿದ್ದಾರೆ. ಯಾವ ಗುದ್ದಲಿ-ದೊಣ್ಣೆಗಳಿಂದ ಮಂಜುನಾಥ ಚಿಕ್ಕಮ್ಮನನ್ನ ಸಾಯಿಸಲು ಹೋಗಿದ್ದನೋ, ಅದೇ ಆಯುಧಗಳು ಈಗ ಆತನ ಪ್ರಾಣಪಕ್ಷಿ ಹಾರಿಸಿವೆ. ದೊಣ್ಣೆಗಳ ಏಟಿಗೆ ನಲುಗಿ, ಗುದ್ದಲಿಯ ಹೊಡೆತಕ್ಕೆ ನುಚ್ಚುನೂರಾದ ಮಂಜುನಾಥ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ.

​ಘಟನಾ ಸ್ಥಳಕ್ಕೆ ಹುಲಿಯೂರುದುರ್ಗ ಪೊಲೀಸರು ಭೇಟಿ ನೀಡಿದ್ದು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸಾಕ್ಷ್ಯಗಳನ್ನ ಕಲೆಹಾಕಿದ್ದಾರೆ. ಮಗನೇ ತಾಯಿಯ ಮೇಲಿನ ಹಲ್ಲೆಗೆ ಪ್ರತಿಯಾಗಿ ಕೊಲೆ ಮಾಡಿರುವ ಈ ಸುದ್ದಿ ಜಿಲ್ಲಾದ್ಯಂತ ಸಂಚಲನ ಮೂಡಿಸಿದೆ. ಮೃತ ಮಂಜುನಾಥನ ತಂದೆ ಚಿಕ್ಕರಂಗಯ್ಯ ದೂರಿನ ಮೇರೆಗೆ ಮೂವರ ವಿರುದ್ಧ ಕೇಸ್ ದಾಖಲಾಗಿದ್ದು, ಸದ್ಯ ಪರಾರಿಯಾಗಿರುವ ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಅತಿಯಾದ ಕುಡಿತ ಮತ್ತು ಕ್ಷಣಿಕ ಸಿಟ್ಟು ಒಂದು ಕುಟುಂಬವನ್ನು ಸ್ಮಶಾನವಾಗಿಸಿದೆ.

Comments

Leave a Comment

Prev Post ಸೈಕಲ್ ಮೇಲೆ ಕುಳಿತು ಆಟವಾಡುತ್ತಿದ್ದ ಕಂದನಿಗೆ 'ಯಮ'ನಾದ ಕಾರು: ಅಪ್ಪನ ಕಣ್ಣೆದುರೇ ಮಣ್ಣಾದ ಮಗ!
Next Post ಕಲಬುರಗಿ ಕಂಪಿಟ್ಟಿತು.. ವಾಡಿ ನಡುಗಿತು!: ನಡುರಸ್ತೆಯಲ್ಲೇ ನಡೆದ ‘ಡೆತ್ ವಾರಂಟ್’ ಶೈಲಿಯ ಮರ್ಡರ್!

ಆಮಿರ್ ಖಾನ್, ಅಜಯ್ ದೇವಗನ್, ಅಕ್ಷಯ್ ಕುಮಾರ್ ಸಿನಿಮಾಗಳ ಹಿಂದಿಕ್ಕಿದ ‘ಕಾಂತಾರ 1’

Kantara Chapter 1 box office: ‘ಕಾಂತಾರ: ಚಾಪ್ಟರ್ 1’ ಸಿನಿಮಾ ತಮಿಳುನಾಡು, ಆಂಧ್ರ, ತೆಲಂಗಾಣಗಳಲ್ಲಿ 100 ಕೋಟಿಯ ಗಡಿಯತ್ತ ಸಿನಿಮಾ ದಾಪುಗಾಲು ಹಾಕಿದ್ದು ಆಯಾ ರಾಜ್ಯಗಳಲ್ಲಿ ಕೆಲ ಹೊಸ ದಾಖಲೆಗಳನ್ನು ಸಹ ಬರೆದಿದೆ. ಉತ್ತರ ಭಾರತದಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು, ಈಗಾಗಲೇ ಆಮಿರ್ ಖಾನ್, ಅಜಯ್ ದೇವಗನ್, ಅಕ್ಷಯ್ ಕುಮಾರ್ ಅವರ ಹಿಟ್ ಸಿನಿಮಾಗಳ ಗಳಿಕೆಯ ದಾಖಲೆಗಳನ್ನೇ ಮುರಿದು ಹಾಕಿದೆ.

ಬಾರದ ಲೋಕಕ್ಕೆ ಹೋದ ‘ಉಷಾ’: ತಪ್ಪು ಒಪ್ಪಿಕೊಂಡರೂ ಮನ್ನಿಸಲಿಲ್ಲವೇ ಈ ಸಮಾಜ?

​"ನಾನು ತಪ್ಪು ಮಾಡಿದ್ದು ನಿಜ, ಆದ್ರೆ ಈ ಕಿರುಕುಳ ತಾಳಲಾರೆ.." - ಕಣ್ಣೀರು ಹಾಕುತ್ತಲೇ ಸಾವಿನ ಮನೆ ಸೇರಿದ ಅಬಲೆ!

ಧಾರವಾಡ ಸೆಂಟ್ರಲ್ ಜೈಲ್ 'ಡ್ರಗ್ಸ್' ದಂಧೆ ಅಡ್ಡ: ಬೇಲಿಯೇ ಎದ್ದು ಹೊಲ ಮೇಯ್ದ ರಣರೋಚಕ ಸ್ಟೋರಿ!

ಕತ್ತಲಲ್ಲಿ ಖೈದಿಗಳಿಗೆ 'ಕಿಕ್' ನೀಡುತ್ತಿದ್ದ ಖಾಕಿಧಾರಿಗಳು: ಮುತಾಲಿಕ್ ಎಚ್ಚರಿಕೆ ಬೆನ್ನಲ್ಲೇ ಪೊಲೀಸರ ಮಿಡ್‌ನೈಟ್ ಆಪರೇಷನ್ ಸಕ್ಸಸ್!

ಮಂಗಳೂರಿನಲ್ಲಿ ನೆತ್ತರು ಹರಿಸಿದ ಗ್ಯಾಂಗ್‌ವರ್: ತೊಕ್ಕೊಟ್ಟು ಫ್ಲೈಓವರ್ ಮೇಲೆ 'ಟಾಬ್ಲೆಟ್ ಆರಿಫ್' ಭೀಕರ ಕೊಲೆ!

ಸಿನಿಮೀಯ ಮಾದರಿಯಲ್ಲಿ ನಡೆದ ಹತ್ಯೆ: ಬೈಕ್ ಸವಾರನ ಮೇಲೆ ಕಾರ್ ಹರಿಸಿ, ಮಾರಕಾಸ್ತ್ರಗಳಿಂದ ಕೊಚ್ಚಿ ಪರಾರಿಯಾದ ದುಷ್ಕರ್ಮಿಗಳು!

ತುಂಗಭದ್ರಾ ನದಿಯ ಮಡಿಲಲ್ಲಿ ಕರಗಿದ ಕನಸುಗಳು: ಒಂದೇ ಕುಟುಂಬದ ನಾಲ್ವರ ದುರಂತ ಅಂತ್ಯ

ಮದುವೆಯ ಸಂಭ್ರಮದ ನಡುವೆ ಮರಣ ಮೃದಂಗ: ರಾಯಚೂರು ಕುಟುಂಬದಲ್ಲಿ ಆವರಿಸಿದ ಶೋಕದ ಕಾರ್ಮೋಡ

ಶಿವಮೊಗ್ಗದ ಲಯನ್ ಸಫಾರಿಯಲ್ಲಿ ಬೆಚ್ಚಿಬೀಳಿಸುವ ಸತ್ಯಗಳು ಬಯಲು: ಡಾ. ಸಮೀಕ್ಷಾ ರೆಡ್ಡಿ ಸಾವಿನ ಸುತ್ತ ನಿಗೂಢ ಜಾಲ!

ಅಲ್ಲಿ ಎಲ್ಲವೂ ಸರಿಯಿಲ್ಲ!" - ವೈದ್ಯೆಯ ಕೊನೆಯ ವಾಟ್ಸಪ್ ಸಂದೇಶಗಳು ಬಯಲು ಮಾಡಿದ ಭೀಕರ ವಾಸ್ತವ!

Read all News